Posts

Showing posts from 2023

ತುಮಟಿ ಗ್ರಾಮದಲ್ಲಿ ಅಪರೂಪದ ಹಂದಿಬೇಟೆ ವೀರಗಲ್ಲು ಶೋಧ....

Image
       ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ‘ತುಮಟಿ’ ಗ್ರಾಮದಲ್ಲಿ ಇತ್ತೀಚೆಗೆ ಕೈಗೊಂಡ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಅಪ್ರಕಟಿತ ಹಂದಿಬೇಟೆ ವೀರಗಲ್ಲನ್ನು ಪತ್ತೆಹಚ್ಚಲಾಯಿತು. ತುಮಟಿ ಗ್ರಾಮದ ದುಗ್ಲಾದೇವಿ ಕಟ್ಟೆಯ ಮೇಲೆ ಇರಿಸಿರುವ ಹಂದಿ ಬೇಟೆ ವೀರಗಲ್ಲು ಸುಂದರ ಕೆತ್ತನೆಯಿಂದ ಕೂಡಿದೆ. ಒಂದೇ ಹಂತದಲ್ಲಿ ಪ್ರಧಾನವಾಗಿ ಕಂಡರಿಸಿರುವ ವೀರಗಲ್ಲಿನ ಬಲ ಭಾಗದಲ್ಲಿ ಕುದುರೆಯ ಮೇಲೆ ಕುಳಿತು ಹಂದಿಬೇಟೆಯಲ್ಲಿ ತೊಡಗಿರುವ ವೀರನ ಚಿತ್ರಣವಿದೆ. ಅಲಂಕಾರಿಕ ಪ್ರಭಾವಳಿಯಿಂದ ಕೂಡಿದ ವೀರಗಲ್ಲಿನಲ್ಲಿ ಶಸ್ತ್ರಧಾರಿಯಾದ ವೀರನ ಶಿರದ ಭಾಗವು ತ್ರುಟಿತವಾಗಿದ್ದು, ಸೊಂಟದಲ್ಲಿ ಬಾಕು, ಎಡ ಕೈಯಲ್ಲಿ ಕುದುರೆಯ ಲಗಾಮು ಹಿಡಿದಿದ್ದು, ಬಲ ಕೈಯಲ್ಲಿ ಈಟಿಯನ್ನು ಹಿಡಿದು ಹಂದಿ ಬೇಟೆಗೆ ಯತ್ನಿಸಿರುವಂತೆ ಚಿತ್ರಿಸಲಾಗಿದೆ. ಶಿಲ್ಪಿಯು ವೀರ ಮತ್ತು ಕುದುರೆಯನ್ನು ಪ್ರಧಾನವಾಗಿ ಚಿತ್ರಿಸಿರುವನು. ಕುದುರೆಯು ಸುಂದರವಾದ ಮುಖ ಮತ್ತು ದಷ್ಟಪುಷ್ಟವಾದ ಮೈಕಟ್ಟುನ್ನು ಹೊಂದಿದ್ದು, ಬೆನ್ನಿನ ಮೇಲೆ ಜೀನಿ, ಪಟ್ಟಿಗಳಿಂದ ಅಲಂಕಾರಗೊಳಿಸಲಾಗಿದೆ. ಹಾಗೂ ಮುಂದಿನ ಎರಡು ಕಾಲುಗಳನ್ನು ಮೇಲಕ್ಕೆ ಎತ್ತರಿಸಿದ್ದು, ಹಿಂದಿನ ಕಾಲುಗಳು ನೆಲದ ಮೇಲೆ ಇರಿಸಲಾಗಿದೆ. ಪೃಷ್ಠದ ಭಾಗದಲ್ಲಿ ಉದ್ದನೆಯ ಕೂದಲಿರುವ ಬಾಲದ ಚಿತ್ರಣವನ್ನು ಶಿಲ್ಪಿಯು ಸೊಗಸಾಗಿ ಮೂಡಿಸಿದ್ದಾನೆ. ಪ್ರಾಯಶಃ ವೀರನು  ಬೇಟೆಯ ಸಂದರ್ಭದಲ್ಲಿ ಮರಣವನ್ನು ಹೊಂದಿದ್ದು, ಅದನ್ನು ಸಾಂಕೇತಿಸಲು ಶಿಲ್ಪಿಯು ಕುದುರೆಯ ಮುಂದಿನ ಎರ

ಶ್ರೀಯುತ ವೀರೇಂದ್ರ ರಾವಿಹಾಳ

Image
ಶ್ರೀಯುತ ವೀರೇಂದ್ರ ರಾವಿಹಾಳ      ಹಿರಿಗೌಡರ ಮಗನ ಮದುವೆಯ ಮೆರವಣಿಗೆಯು ಅತಿ ವೈಭವದಿಂದ ಸಾಗಿ ಹೊರಟಿತ್ತು. ಹೂವಿನಿಂದ ಅಲಂಕೃತವಾದ ರಥದಲ್ಲಿ ನವದಂಪತಿಗಳು ಯುವರಾಜ-ಯುವರಾಣಿಯರಂತೆ ಕಂಗೊಳಿಸುತ್ತಿದ್ದರು. ರಥದ ಮುಂದೆ ಕಿಕ್ಕಿರಿದ ಭಾರಿ ಜನಸಮೂಹ … ಹಿರಿಗೌಡರ ಸಂಬಂಧಿಗಳು , ಗೆಳೆಯರು , ಪುರಜನರು … ಹೀಗೆ ನಭದಲ್ಲಿ ತಾರೆಗಳ ದಿಬ್ಬಣವೇ ಹೊರಟಂತ್ತಿತ್ತು. ಎಡ-ಬಲದ ಉದ್ದಕ್ಕೂ ದೀಪಾಲಂಕೃತ ಸಾಲುಗಳು ಹಿರಿಗೌಡರ ಮಗನ ಮದುವೆಯ ವೈಭವವನ್ನು ಸಾರಿ ಹೇಳುತ್ತಿದ್ದವು. ಮೆರವಣಿಗೆಯ ಮುಂಚೂಣಿಯಲ್ಲಿ ಬೆಂಗಳೂರು ಬ್ಯಾಂಡ್‌ನ ಸಿನಿಮಾ ಹಾಡು ಭರ್ಜರಿಯಾಗಿ ಸಾಗಿತ್ತು. ಇಡೀ ಊರಿಗೆ ಇದೊಂದು ಉತ್ಸವವೆನಿಸಿತ್ತು. ಕೆಲವು ಜನ ಇದನ್ನೆಲ್ಲಾ ನೋಡಿದ್ರೆ ಕಾಡಸಿದ್ದಪ್ಪನ ಜಾತ್ರೆ ನೆಪ್ಪಿಗೆ ಬರ್ತೈತೆ ಅಂದ್ರೆ ಇನ್ನೂ ಕೆಲವು ಜನ ಈ ವರ್ಷ ಊರಿನಾಗೆ ಎರಡು ಜಾತ್ರೆ ಎಂದರು. ಇಡೀ ಊರಿಗೆ ಊರೇ ಸಂತೋಷ ಸಂಭ್ರಮ ಸಡಗರಗಳಲ್ಲಿ ಮುಳುಗಿ ಹೋಗಿತ್ತು. ಮೆರವಣಿಗೆಯ ಮಧ್ಯದಲ್ಲಿ ಬಿಳಿವಸ್ತ್ರ ಧರಿಸಿದ್ದ ಹಿರಿಗೌಡರು ತಮ್ಮ ಹುರಿ ಮೀಸೆಯನ್ನು ಇನ್ನಷ್ಟು ಹುರಿ ಮಾಡಿ ರಾಜಠೀವಿಯಿಂದ ಎದೆಯುಬ್ಬಿಸಿ ನಡೆದು ಬರುತ್ತಿದ್ದರು. ಗೌಡರ ಸುತ್ತ ನೆರೆದ ಜನ ಈ ಸೀಮೇಲಿ ಇಂಥಾ ಮದುವೆನ್ನ ನಾವೆಲ್ಲೀ ಕಂಡಿಲ್ಲಾ ಗೌಡ್ರೆ ಎಂದು ಹೊಗಳುಭಟರಂತೆ ಹೊಗಳಿ ಗೌಡರಿಂದ ತಾವೂ ಮೆಚ್ಚುಗೆ ಗಳಿಸಿ ದೇಶಾವರಿ ನಗೆ ಉಕ್ಕಿಸುತ್ತಿದ್ದರು. ಜನರ ಮಾತಿನಿಂದ ಖುಷಿಗೊಂಡ ಗೌಡರು ಮತ್ತೊಮ್ಮೆ ತಮ್ಮ ಮೀಸೆಯನ