Posts

HISTORICAL PLACE

ನಿಟ್ಟೂರು ಗ್ರಾಮದಲ್ಲಿ ಅಪಪ್ರಕಟಿತ ಶಾಸನ ಪತ್ತೆ:

Image
            ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮವು ಐತಿಹಾಸಿಕವಾಗಿ ತುಂಬಾ ಪ್ರಾಮುಖ್ಯತೆಯನ್ನು ಪಡೆದ ಸ್ಥಳವಾಗಿದೆ. ತುಂಗಭದ್ರ ನದಿ ತೀರದ ಪ್ರದೇಶವಾಗಿದ್ದು ಸಾಮ್ರಾಟ ಅಶೋಕನ ಶಿಲಾಶಾಸನಗಳನ್ನು ಒಳಗೊಂಡಿರುವ ಕಾರಣ ಮೌರ್ಯರ ಆಳ್ವಿಕೆಗೆ ಸಂಬಂಧಿಸಿದಂತೆ ಮಹತ್ವಪೂರ್ಣವಾದ ಮಾಹಿತಿಯನ್ನು ನೀಡುತ್ತದೆ. ಪಕ್ಕದಲ್ಲಿಯೇ ಇರುವ ಶುಕ್ರದಪ್ಪನ ಬೆಟ್ಟವು ಸಹ ಇತಿಹಾಸ ಪೂರ್ವ ಕಾಲಘಟ್ಟದ ಆದಿಮಾನವನ ನೆಲೆಯಾಗಿ ಪ್ರಸಿದ್ಧಿಯಾಗಿದೆ. ಈ ಗ್ರಾಮದಿಂದ ತೆಕ್ಕಲಕೋಟೆಗೆ ಸಂಚರಿಸುವಾಗ ಮಾರ್ಗ ಮಧ್ಯದಲ್ಲಿ ಶ್ರೀಯುತ ಅಶೋಕ ಅಬಕಾರಿ ಮತ್ತು ಮನೋಹರ ಸಿಎಂ ರವರು ಕ್ಷೇತ್ರ ಕಾರ್ಯವನ್ನು ಕೈಗೊಂಡಾಗ ಒಂದು ದೊಡ್ಡದಾದ ಬಂಡೆಯ ಮೇಲೆ ಅಕ್ಷರಗಳನ್ನು ಗಮನಿಸಲಾಗಿದ್ದು ನಂತರ ಇದೊಂದು ಅಪ್ರಕಟಿತ ಶಾಸನವೆಂದು ಗುರುತಿಸಲಾಯಿತು.        ಶಾಸನದ ಹೆಚ್ಚಿನ ವಿವರಣೆಗಾಗಿ ಸಂಪರ್ಕಿಸಿದಾಗ ಗಂಗಾವತಿಯ ಶ್ರೀ ಶರಣಬಸಪ್ಪ ಕೋಲ್ಕರ ಅವರ ಮಾರ್ಗದರ್ಶನದಲ್ಲಿ ಶಾಸನದ ಅಧ್ಯಯನವನ್ನ ಶ್ರೀ ಮಾರುತಿ ಭಜಂತ್ರಿ ಲಿಪಿ ತಜ್ಞರು ಅಧ್ಯಯನ ನಡೆಸಿದ್ದಾರೆ ಅವರ ಜೊತೆ ಹಿರೇ ಬೆಣಕಲ್ ನ ಶ್ರೀ ಮಂಜುನಾಥ ದೊಡ್ಡಮನಿ ಅವರು ಜೊತೆಯಾಗಿ ಆಗಮಿಸಿ ಶಾಸನದ ಪಡೆಯಚ್ಚು ತೆಗೆದುಕೊಳ್ಳುವ ಮುಖಾಂತರ ಶಾಸನವು ಮೌರ್ಯರ ಆಳ್ವಿಕೆಯ ನಂತರದ ಅಂದರೆ ಸುಮಾರು ಐದರಿಂದ ಏಳನೇ ಶತಮಾನದ ಮಧ್ಯಭಾಗದ ಕಾಲಘಟ್ಟದಲ್ಲಿ ಬಳಸಿರುವ ಲಿಪಿಯಾಗಿದ್ದು ಯಾವ...

ತುಮಟಿ ಗ್ರಾಮದಲ್ಲಿ ಅಪರೂಪದ ಹಂದಿಬೇಟೆ ವೀರಗಲ್ಲು ಶೋಧ....

Image
       ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ‘ತುಮಟಿ’ ಗ್ರಾಮದಲ್ಲಿ ಇತ್ತೀಚೆಗೆ ಕೈಗೊಂಡ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಅಪ್ರಕಟಿತ ಹಂದಿಬೇಟೆ ವೀರಗಲ್ಲನ್ನು ಪತ್ತೆಹಚ್ಚಲಾಯಿತು. ತುಮಟಿ ಗ್ರಾಮದ ದುಗ್ಲಾದೇವಿ ಕಟ್ಟೆಯ ಮೇಲೆ ಇರಿಸಿರುವ ಹಂದಿ ಬೇಟೆ ವೀರಗಲ್ಲು ಸುಂದರ ಕೆತ್ತನೆಯಿಂದ ಕೂಡಿದೆ. ಒಂದೇ ಹಂತದಲ್ಲಿ ಪ್ರಧಾನವಾಗಿ ಕಂಡರಿಸಿರುವ ವೀರಗಲ್ಲಿನ ಬಲ ಭಾಗದಲ್ಲಿ ಕುದುರೆಯ ಮೇಲೆ ಕುಳಿತು ಹಂದಿಬೇಟೆಯಲ್ಲಿ ತೊಡಗಿರುವ ವೀರನ ಚಿತ್ರಣವಿದೆ. ಅಲಂಕಾರಿಕ ಪ್ರಭಾವಳಿಯಿಂದ ಕೂಡಿದ ವೀರಗಲ್ಲಿನಲ್ಲಿ ಶಸ್ತ್ರಧಾರಿಯಾದ ವೀರನ ಶಿರದ ಭಾಗವು ತ್ರುಟಿತವಾಗಿದ್ದು, ಸೊಂಟದಲ್ಲಿ ಬಾಕು, ಎಡ ಕೈಯಲ್ಲಿ ಕುದುರೆಯ ಲಗಾಮು ಹಿಡಿದಿದ್ದು, ಬಲ ಕೈಯಲ್ಲಿ ಈಟಿಯನ್ನು ಹಿಡಿದು ಹಂದಿ ಬೇಟೆಗೆ ಯತ್ನಿಸಿರುವಂತೆ ಚಿತ್ರಿಸಲಾಗಿದೆ. ಶಿಲ್ಪಿಯು ವೀರ ಮತ್ತು ಕುದುರೆಯನ್ನು ಪ್ರಧಾನವಾಗಿ ಚಿತ್ರಿಸಿರುವನು. ಕುದುರೆಯು ಸುಂದರವಾದ ಮುಖ ಮತ್ತು ದಷ್ಟಪುಷ್ಟವಾದ ಮೈಕಟ್ಟುನ್ನು ಹೊಂದಿದ್ದು, ಬೆನ್ನಿನ ಮೇಲೆ ಜೀನಿ, ಪಟ್ಟಿಗಳಿಂದ ಅಲಂಕಾರಗೊಳಿಸಲಾಗಿದೆ. ಹಾಗೂ ಮುಂದಿನ ಎರಡು ಕಾಲುಗಳನ್ನು ಮೇಲಕ್ಕೆ ಎತ್ತರಿಸಿದ್ದು, ಹಿಂದಿನ ಕಾಲುಗಳು ನೆಲದ ಮೇಲೆ ಇರಿಸಲಾಗಿದೆ. ಪೃಷ್ಠದ ಭಾಗದಲ್ಲಿ ಉದ್ದನೆಯ ಕೂದಲಿರುವ ಬಾಲದ ಚಿತ್ರಣವನ್ನು ಶಿಲ್ಪಿಯು ಸೊಗಸಾಗಿ ಮೂಡಿಸಿದ್ದಾನೆ. ಪ್ರಾಯಶಃ ವೀರನು  ಬೇಟೆಯ ಸಂದರ್ಭದಲ್ಲಿ ಮರಣವನ್ನು ಹೊಂದಿದ್ದು, ಅದನ್ನು ಸ...

ಮುದುಗಲ್ ಕೋಟೆಯತ್ತ ಒಂದು ಚಿತ್ತ

Image
  ಮುದುಗಲ್ಲ ಕೋಟೆ:            ರಾ ಯಚೂರು ಜಿಲ್ಲೆಯ ಮಸ್ಕಿಯಿಂದ ಸುಮಾರು 28 ಕಿ.ಮೀ ಅಂತರದಲ್ಲಿ ಮುದುಗಲ್ಲ ಎಂಬ ಪಟ್ಟಣವಿದೆ. ಪಟ್ಟದಲ್ಲಿನ ಪ್ರಮುಖ ಐತಿಹಾಸಿಕ ಹೆಜ್ಹೆಗುರುತೆಂದರೆ ಅದುವೇ ಬೃಹತ್ ಕೋಟೆ. ಕೋಟೆಯು ತುಂಬಾ ವಿಶಾಲವಾಗಿದ್ದು ಊರು ಸಮೀಪಿಸುತ್ತಲೇ ಕಣ್ಮನಸೆಳೆಯುವಂತಹ ಮನಮೋಹಕ ದೃಶ್ಯವು ಗೋಚರಿಸುತ್ತದೆ. ಅಂತಹ ದೃಶ್ಯ ಮತ್ತೇನಲ್ಲಾ ಅದುವೇ ಕಡುಗಲ್ಲುಗಳ ಮೇಲೆ ಸುಂದರವಾಗಿ ನಿರ್ಮಿಸಿದ ಕೋಟೆಯ ಶೈಲಿ. ಪದ್ಮಾವತ್ ಚಲನಚಿತ್ರ ನೋಡುವಾಗ ಕೋಟೆಯ ಚಿತ್ರಣಗಳು ಹೇಗಿದ್ದವೋ ಹಾಗೇ ನೋಡನೋಡುತ್ತಲೇ ಎಲ್ಲೋ ಒಂದೆಡೆ ಖುಷಿ ಅಂತೆಯೇ ಇದೆಯಲ್ಲವೆಂದು. ಕುತೂಹಲ ಹೆಚ್ಚಿತು ಹೇಗಾದರೂ ಸವಿಯಲೇಬೇಕೆಂದು ಕೋಟೆಯ ಬಳಿ ಹೋದೆವು. ಅಂದ ಹಾಗೇ ಹೇಳೋದು ಬಿಟ್ಟೆ ನನ್ನ ಜೊತೆ ಸ್ನೇಹಿತ ಚನ್ನಬಸವ ಅವರು ಕೂಡಾ ಬಂದಿದ್ದರು. ಆಯ್ತು ಈಗ ನಾವು ಕೋಟೆಯ ಬಳಿ ಬರುತ್ತಿದ್ದಂತೆಯೇ ಸುತ್ತಲೂ ಜಲದುರ್ಗವನ್ನ ಒಳಗೊಂಡಿರುವುದು ಇನ್ನೂ ಕುತೂಹಲವನ್ನ ಕೆರಳಿಸಿತು ಆದರೆ ಇಲ್ಲಿ ಬೇಸರದ ವಿಷಯವೇನೆಂದರೆ ಆ ಜಲವು ಸಂಪೂರ್ಣ ಚರಂಡಿ ಮತ್ತು ತ್ಯಾಜ್ಯ ನೀರಿನಂದಲೇ ಕೂಡಿತ್ತು. ಇರ್ಲಿ ಈಗ ಇವೆಲ್ಲಾ ಹೇಳ್ತಾ ಹೋದ್ರೆ ಪ್ರತಿಯೊಂದು ಊರಲ್ಲಿ ಇದೇ ತರನೇ ಇರ್ತವೆ. ಸರಿ ಮುಂದೆ ಪ್ರವೇಶ ದ್ವಾರದ ಬಳಿ ನಿಂತುಕೊಂಡು ನೋಡ್ತಿರುವಾಗ  ತುಂಬಾ ರೋಮಾಂಚನ ಅನುಭವ. ಆ ಶೈಲಿ, ಕಲ್ಲುಗಳ ಬಳಕೆ ಇವೆಲ್ಲಾ ಆಗಿನ ದಿನಗಳನ್ನ ನೆನಪಿಸುವಂತಿದ್ದವು. ನಿಧಾನಕ್...

A Tiger Hunting Hero stone in Tekkalakote

Image
Hi, Namaskar today I am going to introduce you A tiger hunting herostone. Tekkalakote has monuments of many royal dynasties and one of them is this Tiger Hunting Veeragallu which has become very important.  This place is called Lakshmanakatte and the image of the hero fighting valiantly and killing the tiger with his bharchi is created and the dog below is also trying to bite the tiger.  On the back of the hero is carved a woman with her left hand raised.  These tiger hunting veera stones are very delicately and very ornately carved and it can be assumed that this veera may have been very famous in the region or a famous leader.  One of these plates is inscribed with letters i.e. containing an inscription and according to this inscription is written as Lachumappa, the son of Hanumakka.  On this basis it can be understood that Lakshmana he son of Hanumakka, could be this hero. The sun and moon are engraved on the veera stones which indicate that even the sun...

Flowers in Our Garden

Image

ವಿಜಯನಗರ ಸಾಮ್ರಾಜ್ಯದ ಆಡಳಿತಾವಧಿಯ ದಾನಶಾಸನ ಪತ್ತೆ: ತೆಕ್ಕಲಕೋಟೆ.......{ಮನೋಹರ್ ಸಿ ಎಂ ಮತ್ತು ತಂಡ}

Image
ತೆ ಕ್ಕಲಕೋಟೆಯಿಂದ ದೇವಿನಗರಕ್ಕೆ ಸಂಚರಿಸುವ ಮಾರ್ಗಮಧ್ಯೆ ಬಲಬದಿಯಲ್ಲಿರುವ ಓಬುಳೇಶನ ಗುಡ್ಡದಲ್ಲಿ ಇತ್ತೀಚೆಗೆ ಕ್ಷೇತ್ರಕಾರ್ಯ ಕೈಗೊಂಡಾಗ ವಿಜಯನಗರ ಸಾಮ್ರಾಜ್ಯದ ಆಳ್ವಿಕೆಯ ಅವಧಿಯಲ್ಲಿನ ಶಾಸನ ಪತ್ತೆಯಾಗಿದೆ. ಸುಂದರ ಪರಿಸರದಿಂದ ಕೂಡಿದ್ದ ಈ ಬೆಟ್ಟದಲ್ಲಿ ಓಬುಳೇಶನ ದೇವಾಲಯವಿರುವ ಕಾರಣದಿಂದಾಗಿಯೇ ಜನಪದರು ಓಬುಳೇಶನ ಗುಡ್ಡ ಎಂದು ಕರೆಯುವುದು ವಾಡಿಕೆಯಾಗಿದೆ. ದೇವಾಲಯದ ಮುಂಭಾಗದಲ್ಲಿ ಒಂದು ದೊಡ್ಡ ಬಂಡೆಯ/ಗುಂಡಿನ ಮೇಲೆ ಶಾಸನವನ್ನ ಕೆತ್ತಲಾಗಿದೆ. ಶಾಸನವು ಶಂಖ ಮತ್ತು ಚಕ್ರಗಳ ಸಂಕೇತಗಳನ್ನು ಒಳಗೊಂಡಿದ್ದು ಸುಮಾರು ಏಳು ಸಾಲುಗಳ ಪಾಠವನ್ನು ಒಳಗೊಂಡಿದೆ. ವಿಜಯನಗರ ಸಾಮ್ರಾಜ್ಯದ ತುಳುವ ಮನೆತನದಲ್ಲಿನ  ಪ್ರಖ್ಯಾತ ಅರಸನಾಗಿದ್ದಂತಹ ಅಚ್ಯುತ ಮಹಾರಾಯನ ಆಳ್ವಿಕೆಯ ಕಾಲಕ್ಕೆಸಂಬಂಧಿಸಿದ್ದಾಗಿದೆ. ಶಾಸನದ ವಿವರ: ಮನ್ಮಥ ಸಂವತ್ಸರದ ಅವಧಿಯಲ್ಲಿ (ಅಂದರೆ ೧೫೩೫ ರಲ್ಲಿ) ಅಚ್ಯುತ ಮಹಾರಾಯರಿಗೆ ಪುಣ್ಯವಾಗಲೆಂದು ಶ್ರೀಮತು ಸಜಲಮುಂ ವಾರಿಜಮಾನ ಭಾಸ್ಕರ ದೇವರಿ ಗೆ (ಅಂದರೆ ಕಮಲದ ಮೇಲೆ ನಿಂತಿರುವಂತಹ ಭಾಸ್ಕರ ದೇವರಿಗೆ) ತೆಕ್ಕಲಕೋಟೆಯ ಹೊಕುಳರು ತ್ರಿಮುಚ ಕೋಲಿನ ಅಳತೆಯ ಹೊಲವನ್ನು ದಾನ ನೀಡಿರುವಂತೆ ತಿಳಿಸುತ್ತದೆ. ಇದಕ್ಕೆ ತಪ್ಪಿದವರು ಪಂಚ ಮಹಾಪಾತಕಕ್ಕೆ ಒಳಗಾಗುವರು ಎಂದು ಶಾಪಾಶಯವನ್ನು ಸಹಾ ಬರೆಸಲಾಗಿದೆ. ಶಾಸನದಲ್ಲಿ ಭಾಸ್ಕರ ದೇವರನ್ನು ತುಂಬಾ ಸುಂದರವಾಗಿ ವರ್ಣಿಸಲಾಗಿದ್ದು ಇಲ್ಲಿನ ದೇವಾಲಯದ ಪೂರ್ವದ ಹೆಸರು ಭಾಸ್ಕರ ದೇವಾಲಯವಾಗಿತ್ತೆಂದ...

ಭರವಸೆಯ ಬದುಕು : ಮನೋಹರ್ ಸಿ ಎಮ್

ಭರವಸೆಯ ಬದುಕು : ಮನೋಹರ್ ಸಿ ಎಮ್ ಈ ಪ್ರಪಂಚವು ಉಗಮವಾದ ಘಳಿಗೆಯಿಂದಲೇ ಪ್ರತಿಯೊಂದು ಜೀವರಾಶಿಯು ತನ್ನ ಅಸ್ತಿತ್ವದ ಉಳಿವಿಗಾಗಿ ಪರಿತಪಿಸುತ್ತಾ ಬದುಕನ್ನು ಸಾಗಿಸುತ್ತಿವೆ. ಇವೆಲ್ಲವುಗಳ ಮಧ್ಯೆ ಮಾನವನ ಜೀವನವು ಉಳಿದೆಲ್ಲಾ ಜೀವರಾಶಿಗಳಿಗಿಂತ ಭಿನ್ನ. ಮಾನವನು ಸಂಘಜೀವಿ ಎಂದು ಹೇಳಿಕೆ ನೀಡಿದ ಅರಿಸ್ಟಾಟಲ್‌ ರವರು ಮಾನವನ ವಿಕಾಸವನ್ನು ಕುರಿತು ಸಾಕಷ್ಟು ಅಧ್ಯಯನ ಕೈಗೊಂಡಿದ್ದರು. ಪರಸ್ಪರ ಆತ್ಮೀಯತೆ, ಸ್ನೇಹ ಮತ್ತು ಪ್ರೀತಿ ವಾತ್ಸಲ್ಯಗಳಿಂದ ಕೂಡಿದ ಸಂವಹನ ಪ್ರತಿಯೊಬ್ಬರಲ್ಲೂ ಸಹ ಒಂದು ಉತ್ತಮ ಬಾಂಧವ್ಯವನ್ನು ರೂಪಿಸಲು ಕಾರಣವಾಗಬಲ್ಲದು. ಇರಲಿ ಇವೆಲ್ಲಾ ವಿಷಯಗಳು ತಮಗೆ ಗೊತ್ತುಂಟು ಹಾಗಾಗಿ ಹೆಚ್ಚಾಗಿ ಪ್ರಸ್ತಾಪಿಸಲ್ಲ.         ಈ ಮೇಲಿನ ಪಟವನ್ನ ಸೆರೆಹಿಡಿಯುವಾಗ ಅದೆನೋ ಒಂದು ರೀತಿ ಖುಷಿಯಾಗಿತ್ತು. ಕಾರಣ ಬದುಕನ್ನು ಸಾಗಿಸಲು ಪ್ರತಿಯೊಬ್ಬರೂ ಕೂಡ ಏನಾದರೂ ಒಂದು ಕಾಯಕವನ್ನ ಮಾಡಲೇಬೇಕು ಇದು ಸಾರ್ವತ್ರಿಕ. ಆದರೂ ಈ ಪಟದಲ್ಲಿನ ವ್ಯಕ್ತಿಯು ತನ್ನ ಕಾಯಕದ ಜೊತೆಯಲ್ಲಿಯೇ ತನ್ನ ಅರ್ಧಾಂಗಿ ಮತ್ತು ಭವಿಷ್ಯದ ಭರವಸೆಯಾದ ಮಗುವಿನ ಜವಾಬ್ದಾರಿಯನ್ನು ಕೂಡ ಹೊತ್ತು ತನ್ನ ಬೆನ್ನ ಹಿಂದೆಯೇ ರಕ್ಷಿಸುತ್ತಿರುವನು. ಅಷ್ಟುಮಾತ್ರವಲ್ಲ ಆ ಮಗು ತನ್ನ ತಂದೆ ಮತ್ತು ತಾಯಿಯ ಬೆಚ್ಚನೆಯ ರಕ್ಷಾ ಕವಚದಲ್ಲಿ ಸಂತಸದಿಂದ ನಲಿದಾಡುವುದನ್ನ ಕಂಡು ಅವರ ತಂದೆ ಮತ್ತು ತಾಯಿಯು ಅದೆಷ್ಟೋ ನೋವಿನ ಕ್ಷಣಗಳನ್ನು ಮರೆತು ಇನ್ನು ಮುಂದೆಯಾದರೂ ನಮ್ಮ ಮ...