Saturday, 16 May 2026

ಹಂಪಿ, ಕಮಲಾಪುರದ ರಾಜ್ಯ ಪುರಾತತ್ವ ಇಲಾಖೆ ಜಿಲ್ಲಾ ಪುರಾತತ್ವ ಸರ್ವೆಕ್ಷಣಾಧಿಕಾರಿ ಭೇಟಿ


ನಿಟ್ಟೂರು ಶಿಲಾಶಾಸನದ ವರದಿ

ಬಳ್ಳಾರಿ ಜಿಲ್ಲೆಯ ತೆಕ್ಕಲಕೋಟೆ ನಿಟ್ಟೂರು ಗ್ರಾಮದ ಈ ಬಂಡೆ ಶಾಸನವನ್ನು ತಜ್ಞರು ಓದಿದ್ದಾರೆ. ಇದು ಎಂಟನೇ ಶತಮಾನದ ರಾಷ್ಟ್ರ ಕೂಟರ ಒಂದನೇ ಕೃಷ್ಣನ ಕಾಲದ ಶಾಸನವೆಂದು ತಿಳಿದುಬಂದಿದೆ. (ಒಂದನೇ ಕೃಷ್ಣ ತಲಕಾಡು ಗಂಗರ ಶ್ರೀಪುರುಷನ ಸಮಕಾಲೀನ)

ವಿವರಗಳು ಇಲ್ಲಿವೆ:

ಇದು ಒಂದನೇ ಕೃಷ್ಣ ಅವರ ಕಾಲದ ಅತ್ಯಂತ ಮಹತ್ವದ ಪ್ರಾಚೀನ ಶಾಸನಗಳಲ್ಲಿ ಒಂದಾಗಿದೆ. ಅವರು ರಾಷ್ಟ್ರಕೂಟ ಸಾಮ್ರಾಜ್ಯದ ಶಕ್ತಿಶಾಲಿ ರಾಜರಾಗಿದ್ದು, ಕ್ರಿ.ಶ. 8ನೇ ಶತಮಾನದಲ್ಲಿ ದಕ್ಷಿಣ ಭಾರತದ ಬಹುಭಾಗವನ್ನು ಆಳಿದರು.
ನಿಟ್ಟೂರು ಗ್ರಾಮದ ಬಳಿ ಪತ್ತೆಯಾದ ಈ ಶಾಸನವು ಕನ್ನಡ ಇತಿಹಾಸದ ದೃಷ್ಟಿಯಿಂದ ವಿಶೇಷ ಮಹತ್ವ ಹೊಂದಿದೆ. ಇದು ಕೆಳಗಿನ ವಿಷಯಗಳಿಗೆ ಸಾಕ್ಷಿಯಾಗಿದೆ:
ಆಡಳಿತ ಭಾಷೆಯಾಗಿ ಪ್ರಾಚೀನ ಕನ್ನಡದ ಬಳಕೆ
ರಾಷ್ಟ್ರಕೂಟರ ಕಾಲದ ಭೂದಾನ ಪದ್ಧತಿ
ಪ್ರಾದೇಶಿಕ ಆಡಳಿತ ವಿಭಾಗಗಳು
ಧಾರ್ಮಿಕ ಪುಣ್ಯ ಮತ್ತು ಶಾಪವಾಕ್ಯಗಳ ಸಂಪ್ರದಾಯ
ಈ ಶಾಸನದ ಮುಖ್ಯ ಅಂಶಗಳು:
ಇದು ಅಕಾಲವರ್ಷ ಕೃಷ್ಣ ಪ್ರಥಮ (ಕ್ರಿ.ಶ. 756–774) ಅವರ ಕಾಲದ ಶಾಸನವಾಗಿದೆ
ರಾಜನು ಒಬ್ಬ ವ್ಯಕ್ತಿಗೆ 12 ಮತ್ತರು ನೀರಾವರಿ ಭೂಮಿಯನ್ನು ದಾನ ಮಾಡಿದ ದಾಖಲೆಯಾಗಿದೆ
ಭೂಮಿಯನ್ನು ರಾಜಮಾನ (ರಾಜಕೀಯ ಅಳತೆ ಪದ್ಧತಿ) ಪ್ರಕಾರ ಅಳೆಯಲಾಗಿದೆ
ದಾನದೊಂದಿಗೆ ಉಂಚಭೋಗ ಹಕ್ಕುಗಳನ್ನೂ ನೀಡಲಾಗಿದೆ
“100” ಮತ್ತು “70” ಅಂತ್ಯ ಹೊಂದಿರುವ ಎರಡು ಆಡಳಿತ ವಿಭಾಗಗಳ ಉಲ್ಲೇಖವಿದೆ
ನಿಟ್ಟೂರು ಪ್ರದೇಶವನ್ನು ಆಡಳಿತ ನಡೆಸುತ್ತಿದ್ದ ಅಧಿಕಾರಿಯ ಉಲ್ಲೇಖವೂ ಕಾಣಿಸುತ್ತದೆ
ಶಾಸನದ ಕೊನೆಯಲ್ಲಿ ಸಾಮಾನ್ಯವಾಗಿ ಕಾಣುವ ಧಾರ್ಮಿಕ ಶಾಪವಾಕ್ಯವಿದೆ:
ಈ ದಾನವನ್ನು ನಾಶಮಾಡುವವರು ವಾರಾಣಾಸಿಯಲ್ಲಿ ಸಾವಿರ ಬ್ರಾಹ್ಮಣರು ಹಾಗೂ ಸಾವಿರ ಗೋವುಗಳನ್ನು ಕೊಂದ ಪಾಪಕ್ಕೆ ಒಳಗಾಗುತ್ತಾರೆ
ಈ ದಾನವನ್ನು ರಕ್ಷಿಸುವವರು ಅಶ್ವಮೇಧ ಯಾಗ ಮಾಡಿದ ಪುಣ್ಯವನ್ನು ಪಡೆಯುತ್ತಾರೆ
ಈ ಶಾಸನವು ಅಶೋಕನ ಶಾಸನದ ಇರುವ ಪ್ರದೇಶದ ಸಮೀಪದಲ್ಲಿರುವುದರಿಂದ, ಮೌರ್ಯರಿಂದ ರಾಷ್ಟ್ರಕೂಟರ ಕಾಲದವರೆಗೆ ಈ ಪ್ರದೇಶದ ಐತಿಹಾಸಿಕ ಮಹತ್ವವನ್ನು ತೋರಿಸುತ್ತದೆ.
ಇದಲ್ಲದೆ, ಕ್ರಿ.ಶ. 8ನೇ ಶತಮಾನದಲ್ಲಿಯೇ ಕನ್ನಡ ಭಾಷೆ ಆಡಳಿತ ಭಾಷೆಯಾಗಿ ಬಲವಾಗಿ ಸ್ಥಾಪಿತವಾಗಿದ್ದುದನ್ನು ಈ ಶಾಸನ ಸ್ಪಷ್ಟಪಡಿಸುತ್ತದೆ.

Friday, 15 May 2026

ನಿಟ್ಟೂರು ಗ್ರಾಮದಲ್ಲಿ ಅಪಪ್ರಕಟಿತ ಶಾಸನ ಪತ್ತೆ:


      
     ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮವು ಐತಿಹಾಸಿಕವಾಗಿ ತುಂಬಾ ಪ್ರಾಮುಖ್ಯತೆಯನ್ನು ಪಡೆದ ಸ್ಥಳವಾಗಿದೆ. ತುಂಗಭದ್ರ ನದಿ ತೀರದ ಪ್ರದೇಶವಾಗಿದ್ದು ಸಾಮ್ರಾಟ ಅಶೋಕನ ಶಿಲಾಶಾಸನಗಳನ್ನು ಒಳಗೊಂಡಿರುವ ಕಾರಣ ಮೌರ್ಯರ ಆಳ್ವಿಕೆಗೆ ಸಂಬಂಧಿಸಿದಂತೆ ಮಹತ್ವಪೂರ್ಣವಾದ ಮಾಹಿತಿಯನ್ನು ನೀಡುತ್ತದೆ. ಪಕ್ಕದಲ್ಲಿಯೇ ಇರುವ ಶುಕ್ರದಪ್ಪನ ಬೆಟ್ಟವು ಸಹ ಇತಿಹಾಸ ಪೂರ್ವ ಕಾಲಘಟ್ಟದ ಆದಿಮಾನವನ ನೆಲೆಯಾಗಿ ಪ್ರಸಿದ್ಧಿಯಾಗಿದೆ. ಈ ಗ್ರಾಮದಿಂದ ತೆಕ್ಕಲಕೋಟೆಗೆ ಸಂಚರಿಸುವಾಗ ಮಾರ್ಗ ಮಧ್ಯದಲ್ಲಿ ಶ್ರೀಯುತ ಅಶೋಕ ಅಬಕಾರಿ ಮತ್ತು ಮನೋಹರ ಸಿಎಂ ರವರು ಕ್ಷೇತ್ರ ಕಾರ್ಯವನ್ನು ಕೈಗೊಂಡಾಗ ಒಂದು ದೊಡ್ಡದಾದ ಬಂಡೆಯ ಮೇಲೆ ಅಕ್ಷರಗಳನ್ನು ಗಮನಿಸಲಾಗಿದ್ದು ನಂತರ ಇದೊಂದು ಅಪ್ರಕಟಿತ ಶಾಸನವೆಂದು ಗುರುತಿಸಲಾಯಿತು. 

      ಶಾಸನದ ಹೆಚ್ಚಿನ ವಿವರಣೆಗಾಗಿ ಸಂಪರ್ಕಿಸಿದಾಗ ಗಂಗಾವತಿಯ ಶ್ರೀ ಶರಣಬಸಪ್ಪ ಕೋಲ್ಕರ ಅವರ ಮಾರ್ಗದರ್ಶನದಲ್ಲಿ ಶಾಸನದ ಅಧ್ಯಯನವನ್ನ ಶ್ರೀ ಮಾರುತಿ ಭಜಂತ್ರಿ ಲಿಪಿ ತಜ್ಞರು ಅಧ್ಯಯನ ನಡೆಸಿದ್ದಾರೆ ಅವರ ಜೊತೆ ಹಿರೇ ಬೆಣಕಲ್ ನ
ಶ್ರೀ ಮಂಜುನಾಥ ದೊಡ್ಡಮನಿ ಅವರು ಜೊತೆಯಾಗಿ ಆಗಮಿಸಿ ಶಾಸನದ ಪಡೆಯಚ್ಚು ತೆಗೆದುಕೊಳ್ಳುವ ಮುಖಾಂತರ ಶಾಸನವು ಮೌರ್ಯರ ಆಳ್ವಿಕೆಯ ನಂತರದ ಅಂದರೆ ಸುಮಾರು ಐದರಿಂದ ಏಳನೇ ಶತಮಾನದ ಮಧ್ಯಭಾಗದ ಕಾಲಘಟ್ಟದಲ್ಲಿ ಬಳಸಿರುವ ಲಿಪಿಯಾಗಿದ್ದು ಯಾವ ಅರಸು ಮನೆತನದ ಆಳ್ವಿಕೆ ಅವಧಿಯಲ್ಲಿ ಈ ಶಾಸನವನ್ನು ಹೊರಡಿಸಲಾಗಿತ್ತು ಎಂಬುದರ ಮಾಹಿತಿಯನ್ನು ಶೀಘ್ರದಲ್ಲೇ ಅಧ್ಯಯನವನ್ನು ಪೂರ್ಣಗೊಳಿಸಿ ಮಾಹಿತಿ ಒದಗಿಸಲಾಗುವುದು ಎಂದು ತಿಳಿಸಿದರು. 

      ಈ ಶಾಸನದ ಅಧ್ಯಯನ ಪೂರ್ಣಗೊಂಡು ವರದಿ ಸಿದ್ಧವಾದರೆ ಸಿರುಗುಪ್ಪ ತಾಲೂಕಿನ ಇತಿಹಾಸಕ್ಕೆ ಮತ್ತೊಂದು ಶಾಸನ ಸೇರ್ಪಡೆಯಾಗಲಿದೆ. ಆದಿಮಾನವನ ನೆಲೆಗಳ ಪಕ್ಕದಲ್ಲಿಯೇ ಶಾಸನಗಳು ಲಭ್ಯವಾಗುತ್ತಿದ್ದು ಇನ್ನಷ್ಟು ಸಂಶೋಧನೆಯ ಕುತೂಹಲವನ್ನು ಹೆಚ್ಚಿಸಲು ಕಾರಣವಾಗುತ್ತಿವೆ. ಈಗಾಗಲೇ ಸಮೀಪದಲ್ಲಿಯೇ ಒಂದು ಬೆಟ್ಟದಲ್ಲಿ ರಾಷ್ಟ್ರಕೂಟರ ಆಳ್ವಿಕೆಯ ಅವಧಿಯ ಲಿಪಿಗಳು ದೊರೆತಿದ್ದವು ಆ ಬೆಟ್ಟದ ಪಕ್ಕದಲ್ಲಿಯೇ ಈ ಶಾಸನವು ಪತ್ತೆಯಾಗಿದ್ದು ಇನ್ನಷ್ಟು ಕುತೂಹಲ ಮತ್ತು ಆಸಕ್ತಿಯನ್ನು ಹೆಚ್ಚಿಸುತ್ತಿವೆ. 

    ಶ್ರೀ ಹರನಾಯಕ, ಶ್ರೀ ಚಂದ್ರಶೇಖರ್ ಕುಂಬಾರ, ಶ್ರೀ ಮದ್ದಾನೆಪ್ಪ ಹೊಸಳ್ಳಿ,ಶ್ರೀ ಮಂಜುನಾಥ, ಶ್ರೀ ಕಾಡಸಿದ್ದ
ಶ್ರೀ ಹೊನ್ನೂರ ಅವರು ಕ್ಷೇತ್ರ ಕಾರ್ಯದಲ್ಲಿ ಸಹಕರಿಸಿದ್ದಾರೆ.

#Discovery of Unpublished Inscription in Nittur Village: 

The village of **Nittur** in Siruguppa Taluk is a site of immense historical significance. Located on the banks of the Tungabhadra River, it provides vital insights into the **Mauryan Empire**, as it houses the rock edicts of Emperor Ashoka. The nearby **Shukradappa Hill** is also renowned as a prehistoric settlement of early humans.
While conducting field research on the route from Nittur to **Tekkalakote**, **Mr. Ashok Abkari** and **Mr. Manohara C.M.** identified characters carved onto a large boulder, which has now been recognized as an unpublished inscription.
### Study and Analysis
For a detailed analysis of the inscription, guidance was sought from **Mr. Sharanabasappa Kolkar** of Gangavathi. Script expert **Mr. Maruti Bhajantri** conducted the study, joined by **Mr. Manjunath Doddamani** from Hire Benakal. By taking an estampage (ink impression) of the inscription, they determined that:
 * **Period:** The script dates back to the post-Mauryan era, specifically between the **5th and 7th centuries CE**.
 * **Status:** Research is ongoing to identify the specific dynasty under whose reign this inscription was issued. A complete report is expected soon.
### Historical Context
Once the final report is prepared, it will add a significant new chapter to the history of Siruguppa Taluk. The discovery of inscriptions in close proximity to prehistoric settlements has intensified scholarly curiosity. Notably, scripts from the **Rashtrakuta dynasty** were previously discovered on a nearby hill; the proximity of this new find adds further intrigue to the region's archaeological wealth.
**Field Support:**
The research effort was supported by Mr. Haranayak, Mr. Chandrashekhar Kumbara, Mr. Maddaneppa Hosalli, Mr. Manjunath, Mr. Kadasidda, and Mr. Honnur.

ತೆಕ್ಕಲಕೋಟೆಯ ಆದಿಮ ಪರಿಸರದಲ್ಲಿ‌ ಕೆರೆ ನಿರ್ಮಾಣದ ಶಿಲಾಶಾಸನ ಶೋಧ:

*ತೆಕ್ಕಲಕೋಟೆಯ ಆದಿಮ ಪರಿಸರದಲ್ಲಿ‌ ಏಳು ತಲೆಮಾರುಗಳ ಹೆಸರುಗಳನ್ನು ಒಳಗೊಂಡಿರುವ ಅಪರೂಪದ ಶಾಸನ ಪತ್ತೆ:*

ತೆಕ್ಕಲಕೋಟೆಯು ಇತಿಹಾಸ ಪೂರ್ವ ಕಾಲದಿಂದಲೂ ಹಲವಾರು ಐತಿಹಾಸಿಕ ಮಹತ್ವವನ್ನು ಪಡೆದುಕೊಂಡಿದ್ದು ಇತ್ತೀಚೆಗೆ ಉತ್ಖನನದಲ್ಲಿ ಆದಿಮಾನವನ ಅಸ್ಥಿಪಂಜರ ದೊರೆತ ನಂತರ ಮತ್ತಷ್ಟು ಪ್ರಸಿದ್ಧಿಯನ್ನು ಪಡೆದುಕೊಂಡಿತು. ಪ್ರಸ್ತುತ ಉತ್ಖನನಗೊಂಡ ಸ್ಥಳವಾದ ಗೌಡರ ಮೂಲೆ ಸಮೀಪದಲ್ಲಿಯೇ ಸ್ಥಳೀಯ ಇತಿಹಾಸ ಆಸಕ್ತರಾದ ಮನೋಹರ್ ಸಿ.ಎಂ ಹಾಗೂ ಸ್ಥಳೀಯರಾದ ಮೀನ್ಗಿ ನಾಗರಾಜರವರು ಶಾಸನವೊಂದನ್ನು ಪತ್ತೆಹಚ್ಚಿದ್ದಾರೆ. 
ಬೃಹತ್ ಬಂಡೆಯೊಂದರ ಮೇಲೆ ಶಾಸನವನ್ನು ಬರೆಯಲಾಗಿದ್ದು  ವ್ಯಕ್ತಿಯೊಬ್ಬ ಕೆರೆಯನ್ನು ನಿರ್ಮಾಣ ಮಾಡಿರುವ ಬಗ್ಗೆ ದಾಖಲೆಯನ್ನು ಒದಗಿಸುತ್ತದೆ. 

ಶಾಸನದ ವಿವರ: ಆರು ಸಾಲುಗಳನ್ನು ಒಳಗೊಂಡಿರುವ ಈ ಶಾಸನವು ಕನ್ನಡ ಲಿಪಿಯನ್ನು ಒಳಗೊಂಡಿದ್ದು ಸೂರ್ಯ ಮತ್ತು ಚಂದ್ರನ ಸಂಕೇತದೊಂದಿಗೆ ಆರಂಭವಾಗಿ "ಟೆಕಲಕೊಟೆ ನಾಡಗೌಡ ಯರೆ ತ್ರಿಜಣ ಗೌಡನ ಮಗ ಮಲಣಗೌಡನ ಮಗ ಚಿಣಗೌಡನ ಮಗ ಪ್ರಜಟನ ಮಗ ಗೌಡಪನ ಮಗ ತ್ರಿಚಣ ಚನ್ನವಿರಪ ಗೌಡನು ಕಟಿಸಿದ ಕೆರೆ" ಎಂದು ಬರೆಯಲಾಗಿದೆ. ಲಿಪಿತಜ್ಞರಾದ ಮಾರುತಿ ಭಜಂತ್ರಿರವರ‌‌ ಅಧ್ಯಯನದ ಪ್ರಕಾರ ಶಾಸನದ‌ ಲಿಪಿ‌ ಮತ್ತು ಬರವಣಿಗೆಯ ಭಾಷೆಯನ್ನು ಆಧಾರವನ್ನಾಗಿ ಪರಿಗಣಿಸಿ ವಿಜಯನಗರ ಮತ್ತು ವಿಜಯನಗರೋತ್ತರ  (೧೭ ರಿಂದ ೧೮ ನೇ ಶತಮಾನ) ಕಾಲಘಟ್ಟದಲ್ಲಿ ಬರೆಸಿರಬಹುದು ಎಂದು ಅಭಿಪ್ರಾಯ ನೀಡಿದ್ದಾರೆ.

        ಶಾಸನದಲ್ಲಿ ತೆಕ್ಕಲಕೋಟೆಯ ಸ್ಥಳನಾಮವನ್ನು "ಟೆಕಲಕೊಟೆ" ಎಂದು ನಮೂದಿಸಿದ್ದು ವ್ಯಕ್ತಿಯೊಬ್ಬ (ತ್ರಿಚಣ ಚನ್ನವಿರಪ ಗೌಡ) ತಾನು ಕೆರೆಯನ್ನು ನಿರ್ಮಿಸಿದ ಸಂದರ್ಭದಲ್ಲಿ‌ ತನ್ನ ವಂಶದ ಮತ್ತು ತನ್ನ ಪ್ರತಿಷ್ಠೆಯನ್ನ ತೋರ್ಪಡಿಸುವುದಕ್ಕಾಗಿ ತನ್ನ ವಂಶದಲ್ಲಿ ಉತ್ತಮ ರಾಜಕೀಯ ಹಿನ್ನಲೆಯನ್ನು ಹೊಂದಿರುವಂತಹ ಅಂದರೆ ವಿಜಯನಗರ ಕಾಲದಲ್ಲಿ ನಾಡಗೌಡರಾಗಿದ್ದಂತಹ ತನ್ನ ವಂಶದ ಹಿರಿಯಜ್ಜನ ಹೆಸರನ್ನು ಗುರುತಿಸುವ ಕಾರ್ಯವನ್ನು ಮಾಡಿದ್ದಾನೆ ಅದರ ಜೊತೆಗೆ ಯರೆ ತ್ರಿಜನಗೌಡನ ನಂತರ ಬಂದ ವಂಶಜರು ನಾಡಗೌಡ ಎನ್ನುವಂತಹ ಹುದ್ದೆಯನ್ನು ಕಳೆದುಕೊಂಡಿರುವ ಸಾಧ್ಯತೆ ಇರುತ್ತದೆ.ನಂತರದಲ್ಲಿ ಬರುವ ಎಲ್ಲಾ ಹೆಸರುಗಳು ಗೌಡ ಎಂಬ ಪದದಿಂದ ಮುಕ್ತಾಯಗೊಂಡಿರುತ್ತವೆ.ಈ ಶಾಸನದಿಂದ ತಿಳಿದುಬರುವಂತೆ ಶಾಸನ ತಜ್ಞರ ಅಭಿಪ್ರಾಯದ ಪ್ರಕಾರ ತೆಕ್ಕಲಕೋಟೆ ಕುರುಗೋಡಿನ ಸಿಂಧರ ಕಾಲದಲ್ಲಿ ತೆಕ್ಕೆಕಲ್ಲು ೧೨ ಎಂಬ ನಾಮದೊಂದಿಗೆ ವಿಶೇಷತೆಯನ್ನು ಪಡೆದುಕೊಂಡಿದ್ದು ಆ ವಿಶೇಷತೆ ವಿಜಯನಗರ ಕಾಲದಲ್ಲಿಯೂ ಕೂಡ ಒಂದು ನಾಡು ಆಗಿ ಪ್ರಸಿದ್ಧತೆಯನ್ನು ಹೊಂದಿತ್ತು ಎಂದು ಈ ಶಾಸನದಿಂದ ತಿಳಿದುಬರುತ್ತದೆ. ಹಿರಿಯಜ್ಜರಿಂದ ತನ್ನ ಹೆಸರಿನವರೆಗೂ ಎಲ್ಲರ ಹೆಸರುಗಳನ್ನು ಶಾಸನದಲ್ಲಿ ಬರೆಸಿರುವುದು ತುಂಬಾ ವಿಶೇಷವಾದ ಮತ್ತು ಅಪರೂಪದ ಮಾಹಿತಿಯನ್ನು ಒದಗಿಸುತ್ತದೆ.

  ಶಾಸನದ ಮುಂದೆಯೇ ಕೆರೆಯ ಅವಶೇಷಗಳನ್ನು ಒಳಗೊಂಡಿದ್ದು ಪ್ರಸ್ತುತದಲ್ಲಿ ಗುನ್ನಯ್ಯನ ಕೆರೆ ಎಂದು ಸಂಬೋಧಿಸಲಾಗುತ್ತಿದೆ. ವ್ಯವಸಾಯಕ್ಕಾಗಿ, ಸಾರ್ವಜನಿಕರಿಗಾಗಿ ಹಾಗೂ ಪ್ರಾಣಿ, ಪಕ್ಷಿಗಳಿಗೆ‌ ನೀರುಣಿಸಲು ಕೆರೆಯನ್ನು ನಿರ್ಮಾಣ ಮಾಡಿದ ಮಹತ್ತರವಾದ ಕಾರ್ಯವನ್ನು ಕುರಿತಂತೆ ಸ್ಮರಿಸುವ  ದಾಖಲೆಯಾಗಿದೆ. ಈ ಪ್ರದೇಶದಲ್ಲಿ ಗೌಡರು ಅಧಿಪತ್ಯವನ್ನು ಹೊಂದಿದ್ದ ಕಾರಣ ಗೌಡರ ಮೂಲೆ (ಪ್ರಸ್ತುತ) ಎಂಬ ಹೆಸರು ಬಂದಿತು ಎಂಬ ಸ್ಥಳದ ಹಿನ್ನಲೆಯನ್ನು ಅರಿಯಲು ಸಹಕಾರಿಯಾಗಿದೆ. 
   
     ಶಾಸನ ಪತ್ತೆ ಕಾರ್ಯದಲ್ಲಿ ಅಶೋಕ್ ಅಬಕಾರಿ ಸಹಕರಿಸಿದ್ದಾರೆ.

Wednesday, 13 May 2026

ತುಮಟಿ ಗ್ರಾಮದಲ್ಲಿ ಅಪರೂಪದ ಹಂದಿಬೇಟೆ ವೀರಗಲ್ಲು ಶೋಧ....

       ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ‘ತುಮಟಿ’ ಗ್ರಾಮದಲ್ಲಿ ಇತ್ತೀಚೆಗೆ ಕೈಗೊಂಡ ಕ್ಷೇತ್ರಕಾರ್ಯದ ಸಂದರ್ಭದಲ್ಲಿ ಅಪ್ರಕಟಿತ ಹಂದಿಬೇಟೆ ವೀರಗಲ್ಲನ್ನು ಪತ್ತೆಹಚ್ಚಲಾಯಿತು. ತುಮಟಿ ಗ್ರಾಮದ ದುಗ್ಲಾದೇವಿ ಕಟ್ಟೆಯ ಮೇಲೆ ಇರಿಸಿರುವ ಹಂದಿ ಬೇಟೆ ವೀರಗಲ್ಲು ಸುಂದರ ಕೆತ್ತನೆಯಿಂದ ಕೂಡಿದೆ. ಒಂದೇ ಹಂತದಲ್ಲಿ ಪ್ರಧಾನವಾಗಿ ಕಂಡರಿಸಿರುವ ವೀರಗಲ್ಲಿನ ಬಲ ಭಾಗದಲ್ಲಿ ಕುದುರೆಯ ಮೇಲೆ ಕುಳಿತು ಹಂದಿಬೇಟೆಯಲ್ಲಿ ತೊಡಗಿರುವ ವೀರನ ಚಿತ್ರಣವಿದೆ. ಅಲಂಕಾರಿಕ ಪ್ರಭಾವಳಿಯಿಂದ ಕೂಡಿದ ವೀರಗಲ್ಲಿನಲ್ಲಿ ಶಸ್ತ್ರಧಾರಿಯಾದ ವೀರನ ಶಿರದ ಭಾಗವು ತ್ರುಟಿತವಾಗಿದ್ದು, ಸೊಂಟದಲ್ಲಿ ಬಾಕು, ಎಡ ಕೈಯಲ್ಲಿ ಕುದುರೆಯ ಲಗಾಮು ಹಿಡಿದಿದ್ದು, ಬಲ ಕೈಯಲ್ಲಿ ಈಟಿಯನ್ನು ಹಿಡಿದು ಹಂದಿ ಬೇಟೆಗೆ ಯತ್ನಿಸಿರುವಂತೆ ಚಿತ್ರಿಸಲಾಗಿದೆ. ಶಿಲ್ಪಿಯು ವೀರ ಮತ್ತು ಕುದುರೆಯನ್ನು ಪ್ರಧಾನವಾಗಿ ಚಿತ್ರಿಸಿರುವನು. ಕುದುರೆಯು ಸುಂದರವಾದ ಮುಖ ಮತ್ತು ದಷ್ಟಪುಷ್ಟವಾದ ಮೈಕಟ್ಟುನ್ನು ಹೊಂದಿದ್ದು, ಬೆನ್ನಿನ ಮೇಲೆ ಜೀನಿ, ಪಟ್ಟಿಗಳಿಂದ ಅಲಂಕಾರಗೊಳಿಸಲಾಗಿದೆ. ಹಾಗೂ ಮುಂದಿನ ಎರಡು ಕಾಲುಗಳನ್ನು ಮೇಲಕ್ಕೆ ಎತ್ತರಿಸಿದ್ದು, ಹಿಂದಿನ ಕಾಲುಗಳು ನೆಲದ ಮೇಲೆ ಇರಿಸಲಾಗಿದೆ. ಪೃಷ್ಠದ ಭಾಗದಲ್ಲಿ ಉದ್ದನೆಯ ಕೂದಲಿರುವ ಬಾಲದ ಚಿತ್ರಣವನ್ನು ಶಿಲ್ಪಿಯು ಸೊಗಸಾಗಿ ಮೂಡಿಸಿದ್ದಾನೆ. ಪ್ರಾಯಶಃ ವೀರನು  ಬೇಟೆಯ ಸಂದರ್ಭದಲ್ಲಿ ಮರಣವನ್ನು ಹೊಂದಿದ್ದು, ಅದನ್ನು ಸಾಂಕೇತಿಸಲು ಶಿಲ್ಪಿಯು ಕುದುರೆಯ ಮುಂದಿನ ಎರಡು ಕಾಲುಗಳನ್ನು ಮೇಲಕ್ಕೆ ಎತ್ತಿಸಿದ್ದಾನೆ. ಒಟ್ಟಿನಲ್ಲಿ ಇಲ್ಲಿನ ಅನೇಕ ಬಗೆಯ ಗಿಡ ಮರಗಳನ್ನು ಹೊಂದಿರುವ ಬೆಟ್ಟ ಗುಡ್ಡಗಳ ಪ್ರದೇಶವೂ ಕಾಡು ಪ್ರಾಣಿಗಳು ವಾಸಿಸಲು ಯೋಗ್ಯವಾಗಿದ್ದು, ಹಂದಿ, ಮೊಲ, ಜಿಂಕೆಯಂತಹ ಹಲವು ಬಗೆಯ ಪ್ರಾಣಿಗÀಳು ವಾಸವಾಗಿದ್ದವು ಎಂಬ ಸಂಗತಿ ತಿಳಿಯುತ್ತದೆ. ಇದನ್ನು ಅರಿತ ವೀರನು ಅವುಗಳ ಬೇಟೆಗೆ ಸಾಕು ನಾಯಿಗಳ ಜೊತೆಗೆ ತೆರಳಿನಿದ್ದನೆಂಬ ಸಂಗತಿ ತಿಳಿಯುತ್ತದೆ. ಇದರ ಅಲಂಕಾರಿಕ ರಚನೆ ಮತ್ತು ವಿನ್ಯಾಸವನ್ನು ಗಮನಿಸಿದಾಗ ಇದು 14-15ನೆಯ ಶತಮಾನದ ಹಂದಿಬೇಟೆ ವೀರಗಲ್ಲು ಎಂದು ಹೇಳಬಹುದು. ಇದೇ ಮೊದಲ ಬಾರಿಗೆ ಸಂಡೂರು ಭಾಗದಲ್ಲಿ ವರದಿಯಾಗಿರುವ ಹಂದಿಬೇಟೆ ವೀರಗಲ್ಲು ಇದಾಗಿದ್ದು, ಇಲ್ಲಿನ ಸುತ್ತಮುತ್ತಲಿನ ಸಂಡೂರು ಪ್ರದೇಶದಲ್ಲಿ ಇತಿಹಾಸ ಮತ್ತು ಪುರಾತತ್ವ ಸಂಶೋಧಕರು ಹೆಚ್ಚಿನ ಅಧ್ಯಯನ ಕೈಗೊಂಡಲ್ಲಿ ಇಂತಹ ಐತಿಹಾಸಿಕ ಕುರುಹುಗಳು ಮತ್ತಷ್ಟು ಬೆಳಕಿಗೆ ಬರುವ ಸಾಧ್ಯತೆಗಳಿವೆ. ಈ ವೀರಗಲ್ಲಿನ ಸಂಶೋಧನೆಯಲ್ಲಿ ಅಮೂಲ್ಯ ಸಲಹೆಗಳನ್ನು ನೀಡಿದ ಡಾ. ಡಿ.ವಿ.ಪರಮಶಿವಮೂರ್ತಿಯವರಿಗೆ ಹಾಗೂ ಕ್ಷೇತ್ರಕಾರ್ಯದಲ್ಲಿ ಸಹಾಯ ಮಾಡಿದ ನಬಿ ರಸೂಲ್ ಮತ್ತು ಪುನೀತ್ ಕುಮಾರ್ ರವರಿಗೆ ಕೃತಘ್ನತೆಗಳು.

ಸಂಶೋಧಕರು : ಮನೋಹರ ಸಿ.ಎಮ್
                        ಇತಿಹಾಸ ಆಸಕ್ತರು.