Posts

Showing posts from May, 2026

ನಿಟ್ಟೂರು ಗ್ರಾಮದಲ್ಲಿ ಅಪಪ್ರಕಟಿತ ಶಾಸನ ಪತ್ತೆ:

Image
            ಸಿರುಗುಪ್ಪ ತಾಲೂಕಿನ ನಿಟ್ಟೂರು ಗ್ರಾಮವು ಐತಿಹಾಸಿಕವಾಗಿ ತುಂಬಾ ಪ್ರಾಮುಖ್ಯತೆಯನ್ನು ಪಡೆದ ಸ್ಥಳವಾಗಿದೆ. ತುಂಗಭದ್ರ ನದಿ ತೀರದ ಪ್ರದೇಶವಾಗಿದ್ದು ಸಾಮ್ರಾಟ ಅಶೋಕನ ಶಿಲಾಶಾಸನಗಳನ್ನು ಒಳಗೊಂಡಿರುವ ಕಾರಣ ಮೌರ್ಯರ ಆಳ್ವಿಕೆಗೆ ಸಂಬಂಧಿಸಿದಂತೆ ಮಹತ್ವಪೂರ್ಣವಾದ ಮಾಹಿತಿಯನ್ನು ನೀಡುತ್ತದೆ. ಪಕ್ಕದಲ್ಲಿಯೇ ಇರುವ ಶುಕ್ರದಪ್ಪನ ಬೆಟ್ಟವು ಸಹ ಇತಿಹಾಸ ಪೂರ್ವ ಕಾಲಘಟ್ಟದ ಆದಿಮಾನವನ ನೆಲೆಯಾಗಿ ಪ್ರಸಿದ್ಧಿಯಾಗಿದೆ. ಈ ಗ್ರಾಮದಿಂದ ತೆಕ್ಕಲಕೋಟೆಗೆ ಸಂಚರಿಸುವಾಗ ಮಾರ್ಗ ಮಧ್ಯದಲ್ಲಿ ಶ್ರೀಯುತ ಅಶೋಕ ಅಬಕಾರಿ ಮತ್ತು ಮನೋಹರ ಸಿಎಂ ರವರು ಕ್ಷೇತ್ರ ಕಾರ್ಯವನ್ನು ಕೈಗೊಂಡಾಗ ಒಂದು ದೊಡ್ಡದಾದ ಬಂಡೆಯ ಮೇಲೆ ಅಕ್ಷರಗಳನ್ನು ಗಮನಿಸಲಾಗಿದ್ದು ನಂತರ ಇದೊಂದು ಅಪ್ರಕಟಿತ ಶಾಸನವೆಂದು ಗುರುತಿಸಲಾಯಿತು.        ಶಾಸನದ ಹೆಚ್ಚಿನ ವಿವರಣೆಗಾಗಿ ಸಂಪರ್ಕಿಸಿದಾಗ ಗಂಗಾವತಿಯ ಶ್ರೀ ಶರಣಬಸಪ್ಪ ಕೋಲ್ಕರ ಅವರ ಮಾರ್ಗದರ್ಶನದಲ್ಲಿ ಶಾಸನದ ಅಧ್ಯಯನವನ್ನ ಶ್ರೀ ಮಾರುತಿ ಭಜಂತ್ರಿ ಲಿಪಿ ತಜ್ಞರು ಅಧ್ಯಯನ ನಡೆಸಿದ್ದಾರೆ ಅವರ ಜೊತೆ ಹಿರೇ ಬೆಣಕಲ್ ನ ಶ್ರೀ ಮಂಜುನಾಥ ದೊಡ್ಡಮನಿ ಅವರು ಜೊತೆಯಾಗಿ ಆಗಮಿಸಿ ಶಾಸನದ ಪಡೆಯಚ್ಚು ತೆಗೆದುಕೊಳ್ಳುವ ಮುಖಾಂತರ ಶಾಸನವು ಮೌರ್ಯರ ಆಳ್ವಿಕೆಯ ನಂತರದ ಅಂದರೆ ಸುಮಾರು ಐದರಿಂದ ಏಳನೇ ಶತಮಾನದ ಮಧ್ಯಭಾಗದ ಕಾಲಘಟ್ಟದಲ್ಲಿ ಬಳಸಿರುವ ಲಿಪಿಯಾಗಿದ್ದು ಯಾವ...